28th September 2024
ರಾಯಚೂರು,ಸೆ.28- ಅನೇಕ ಏಳು ಬೀಳುಗಳ ನಡುವೆಯೂ, ನನ್ನ ಪರಿಶ್ರಮ ಗುರುತಿಸಿ ನನ್ನನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು, ಮತ್ತಷ್ಟು ಸೇವೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.
ನಗರದ ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಸನ್ಮಾನ ಸ್ವೀರಿಸಿದ್ದು ಸಂತೋಷ ದಾಯಕವಾಗಿದೆ, ಕಿಲ್ಲೆ ಬೃಹನ್ಮಠದ ಶಾಂತಮಲ್ಲಾ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನಿಸಿ ಆಶೀರ್ವದಿಸಿದ್ದು, ನಾನು ಅಪರೂಪದ ವ್ಯಕ್ತಿಯಾಗಿದ್ದೇನೆ ಎಂದರು.
ಯಾವುದೇ ರೀತಿಯ ಒಳ್ಳೆದು ಕೆಟ್ಟದ್ದು ಯಾರು ಏನು ಬೇಕಾದರೂ ಮಾತನಾಡಿದರೂ ನಾವೆಲ್ಲ ಸ್ನೇಹಿತರು, ಯಾವುದೇ ಕೆಟ್ಟ ವಿಚಾರ, ಕೆಟ್ಟ ಕೆಲಸ ಮಾಡದವರಲ್ಲ, ಯಾವುದೇ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡುವವರಲ್ಲ, ಎಲ್ಲವನ್ನು ಸ್ವೀಕಾರ ಮಾಡುತ್ತಿದ್ದೆವು.
ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ, ಇಚ್ಚೆಯೂ ನನ್ನದಾಗಿರಲಿಲ್ಲ, ಇಂಜಿನಿಯರಿAಗ್ ವಿದ್ಯಾಭ್ಯಾಸ ಮಾಡುವ ವೇಳೆ ಅಂತಿಮ ವರ್ಷದಲ್ಲಿ ವಿದ್ಯಾರ್ಥಿ ಚುನಾವಣೆ ವೇಳೆ ಗಲಾಟೆಯಾಗಿ ಈ ವಿಚಾರ ತಂದೆ ಗಮನಕ್ಕೆ ಬಂದಾಗ, ವಿದ್ಯಾರ್ಥಿಗಳ ಸಂಗ ಬಿಡಿಸಿ ತಮ್ಮ ಪರಿಚಯದ ವ್ಯಕ್ತಿ ಜೊತೆಗೆ ಬಿಟ್ಟರು, ಶಾಸಕರು ಕಚೇರಿಯಲ್ಲಿ ವಿದ್ಯಾಭ್ಯಾಸ ಮಾಡಿದೆ, ಆವಾಗ ಎಲ್ಲರ ಪರಿಚಯವಾಯಿತು, ನಂತರ ನಗರಸಭೆ ಚುನಾವಣೆ ನಡೆಯಿತು, ನಮ್ಮ ತಂದೆಯವರ ನಗರಸಭೆ ಸ್ಪರ್ಧೆ ಮಾಡಿದ್ದು ಅಂದು ರಾಜಕೀಯ ಪ್ರವೇಶ ಆರಂಭವಾಯಿತು ಎಂದರು.
ಅAದಿನಿAದ ಅನೇಕ ಏಳು ಬೀಳುಗಳು ಎದುರಿಸಿ ಅನೇಕ ರೀತಿಯ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದೇನೆ, ಇಂದು ಪರಿಶ್ರಮಕ್ಕೆ ಫಲ ದೊರೆತಿದೆ ಎಂದರು.
ಟಾಗೋರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಕೆ.ಶಾಂತಪ್ಪ ಮಾತನಾಡಿ, ಅಧಿಕಾರಕ್ಕಾಗಿ ನಾವು ಹುಡಿಕಿಕೊಂಡು ಹೋಗುವುದಲ್ಲ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರಬೇಕು ಎನ್ನುವ ಮಾತಿಗೆ ಎ.ವಸಂತ ಕುಮಾರ ಅವರೇ ಸಾಕ್ಷಿಯಾಗಿದ್ದಾರೆ.
ವಸಂತಕುಮಾರ ಅವರು ತಳ ಮಟ್ಟದಿಂದ ಬೆಳೆದು ಯಾವುದೇ ಸ್ವಾರ್ಥಯಿಲ್ಲದೆ ಸೇವೆ ಮಾಡುತ್ತಾ ಬಂದಿದ್ದಾರೆ, ಅವರು ಕಠಿಣ ಶ್ರಮದಿಂದಲೇ ಇಂದು ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಅವರನ್ನು ಚಿಕ್ಕಂದಿನಿAದಲೂ ನೋಡುತ್ತಾ ಬಂದಿದ್ದೇವೆ,
ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರಾಗಿ ಜಿಲ್ಲಾಧÀ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಅವರು ಯಾವುದೇ ಕೆಲಸ ನಿಬಾಯಿಸಿದರೂ ಚಾಚು ತಪ್ಪದೆ ಜವಾಬ್ದಾರಿ ಯುತವಾಗಿ ಮಾಡುತ್ತಿದ್ದರು, ಅನೇಕ ಏಳು ಬೀಳುಗಳನ್ನು ಎದುರಿಸಿ ಅನೇಕ ರೀತಿಯ ಅನುಭವ ಕಂಡಿದ್ದಾರೆ, ಅವರ ಕಠಿಣ ಪರಿಶ್ರಮ ಗುರುತಿಸಿ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ, ಅವರನ್ನು ಅಧಿಕಾರ ಹುಡುಕಿಕೊಂಡು ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಟಾಗೋರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಕೆ.ಅಮರೇಶ. ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ್, ಬೂದೆಪ್ಪ ರಾಯಚೂರುಕರ್, ಜಗದೀಶ ಗುಪ್ತಾ ಸೇರಿದಂತೆ ಅನೇಕರು ಇದ್ದರು.
ಪರಿಶ್ರಮ ಗುರುತಿಸಿ ಆಯ್ಕೆ ಮಾಡಿದ್ದು, ಮತ್ತಷ್ಟು ಸೇವೆಗೆ ಪ್ರೇರಣೆ:.ವಸಂತಕುಮಾರ
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ